ಬ್ರಹ್ಮಚಾರಿಯಾದ ಸತೀಶ್
- By Nithyanand Amin
- Category: News
- No comment
- Hits: 562
ನೀನಾಸಂ ಸತೀಶ್ ಮತ್ತು ಉದಯ್ ಕೆ ಮೆಹ್ತಾ ಲವ್ ಇನ್ ಮಂಡ್ಯ ಸಿನಿಮಾದ ನಂತರ ಒಂದಾಗಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ವು. ಈಗ ಅವರ ಸಿನಿಮಾಗೆ ಬ್ರಹ್ಮಚಾರಿ ಎಂಬ ಟೈಟಲ್ ಇಡಲಾಗಿದೆ.
ಈ ಹಿಂದೆ ಲವ್ ಇನ್ ಮಂಡ್ಯ ಸಿನಿಮಾದಲ್ಲಿ ಸತೀರ್ಶ್ ಕೇಬಲ್ ಕರ್ಣ ಎಂಬ ರೋಲ್ನಲ್ಲಿ ನಟಿಸಿದ್ದರು. ಅದನ್ನು ಉದಯ್ ಮೇಹ್ತಾ ನಿರ್ಮಾಣ ಮಾಡಿದ್ದರು. ಈಗ ಇಬ್ಬರೂ ಮತ್ತೆ ಒಂದಾಗಿದ್ದೇವೆ, ಸದ್ಯದಲ್ಲೇ ಹೊಸ ಸುದ್ದಿ ನೀಡುತ್ತೇವೆ ಎಂದಿದ್ದರು. ಸದ್ಯ ಟೈಟಲ್ ಮಾತ್ರ ಫೈನಲ್ ಆಗಿದ್ದು, ಉಳಿದ ವಿವರಗಳನ್ನು ಸದ್ಯದಲ್ಲೇ ನೀಡುತ್ತಾರಂತೆ. ಈ ಮೂಲಕ ಲವ್ ಇನ್ ಮಂಡ್ಯ ಸಿಕ್ವೇಲ್ ಮಾಡ್ತಾರೆ ಎಂಬ ಸುದ್ದಿಗೆ ಬ್ರೇಕ್ ಹಾಕಲಾಗಿದೆ.